ವಿಡಿಯೋ-ಹಾಸನ: ಕಟ್ಟಿನಕೆರೆ ಮಾರ್ಕೆಟ್ ಮಳಿಗೆ ವರ್ತಕರಿಗೆ ಅಭಯ ನೀಡಿದ ಬಿಜೆಪಿ ನಾಯಕ ಪ್ರೀತಮ್ ಗೌಡ: ಹೊರಗಿನವರಿಗೆ ಇಲ್ಲ ಇ-ಹರಾಜು ಎಂಟ್ರಿ!

Hassan: BJP leader Preetam Gowda promised to protect the interests of existing traders who have been doing business in the city's Kattinakere Market for decades.

ಹಾಸನ : ನಗರದ ಕಟ್ಟಿನಕೆರೆ ಮಾರ್ಕೆಟ್‌ನಲ್ಲಿ ಹತ್ತಾರು ವರ್ಷಗಳಿಂದ ವ್ಯಾಪಾರ ನಡೆಸುತ್ತಿರುವ ಹಾಲಿ ವರ್ತಕರ ಹಿತ ಕಾಪಾಡಲು ಬಿಜೆಪಿ ನಾಯಕ ಪ್ರೀತಮ್ ಗೌಡ ಭರವಸೆ ನೀಡಿದರು.

ಜಿಎಸ್ಟಿ ದರ ಇಳಿಕೆ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ವರ್ತಕರಿಗೆ ಸಿಹಿ ಹಂಚಿದ ನಂತರ ಅವರು ಮಾತನಾಡಿದರು.

 ಮಳಿಗೆಗಳ ಇ-ಟೆಂಡರ್ ಪ್ರಕ್ರಿಯೆಯಲ್ಲಿ ಈಗಾಗಲೇ ವ್ಯಾಪಾರ ನಡೆಸುತ್ತಿರುವ 487 ವರ್ತಕರಿಗಷ್ಟೇ ಅವಕಾಶ ನೀಡಲಾಗುತ್ತಿದ್ದು, ಯಾವುದೇ ಕಾರಣಕ್ಕೂ ಹೊರಗಿನವರಿಗೆ ಅವಕಾಶ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

“ನಾನು ಇಲ್ಲಿ ರಾಜಕಾರಣ ಮಾಡಲು ಬಂದಿಲ್ಲ. ವರ್ತಕರ ಪರವಾಗಿ ಹೋರಾಡಲು ಬದ್ಧನಾಗಿದ್ದೇನೆ. ಈ ಕುರಿತು ಅಗತ್ಯವಿದ್ದರೆ ಸಂಸದರು, ಶಾಸಕ ಮತ್ತು ವಿಧಾನಪರಿಷತ್ ಸದಸ್ಯರೊಂದಿಗೆ ಮಾತನಾಡುತ್ತೇನೆ” ಎಂದು ಪ್ರೀತಮ್ ಗೌಡ ಹೇಳಿದರು.

GST ಇಳಿಕೆ ಹಿನ್ನೆಲೆಯಲ್ಲಿ ವರ್ತಕರು ಹಾಗೂ ಗ್ರಾಹಕರಿಗೆ ಸಿಹಿ ತಿನಿಸಿ ಸಂಭ್ರಮಾಚರಣೆ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಸಕ ಸಿಮೆಂಟ್ ಮಂಜು, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಸೇರಿದಂತೆ ಹಲವು ಪಕ್ಷದ ನಾಯಕರು ಪ್ರೀತಮ್ ಗೌಡರಿಗೆ ಸಾಥ್ ನೀಡಿದರು.