‘ದೌರ್ಜನ್ಯ ಸಹಿಸುವುದಿಲ್ಲ’: ಹಾಸನದಲ್ಲಿ ಮಾರ್ಚ್ 7-8ರಂದು ಮಹಿಳಾ ಚೈತನ್ಯ ದಿನ – ‘ಹಾಸನ ಮಣ್ಣಿನ ಹೆಣ್ಣು ದನಿಗಳು’ ಪುಸ್ತಕ ಬಿಡುಗಡೆ

The Karnataka State Women's Anti-Atrocities Coalition is a network of pro-people, pro-women organizations that has been participating in pro-people struggles for the past thirteen years by organizing rallies, conferences, and awareness programs in various districts of Karnataka.

ಹಾಸನ: ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ”ವು ಜನಪರ, ಮಹಿಳಾಪರ ಸಂಘಟನೆಗಳ ಜಾಲವಾಗಿದ್ದು ಕಳೆದ ಹದಿಮೂರು ವರ್ಷಗಳಿಂದ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಜಾಥಾ, ಸಮಾವೇಶ, ಜಾಗೃತಿ ಕಾರ್ಯಕ್ರಮ ನಡೆಸುವುದರೊಂದಿಗೆ ಜನಪರ ಹೋರಾಟಗಳಲ್ಲಿ ಸಹಭಾಗಿತ್ವ ನೀಡುತ್ತಾ ಬಂದಿದೆ.

ರಾಜ್ಯಾದ್ಯಂತ ಇರುವ ಮಹಿಳಾಪರ ಸಂಘಟನೆಗಳು ಒಗ್ಗೂಡಿ “ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ” 2013ರಲ್ಲಿ ನಿರ್ಮಾಣವಾಯಿತು. ಅಲ್ಲಿಂದ ಪ್ರತಿವರ್ಷ ಒಂದೊಂದು ಜಿಲ್ಲೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ‘ಮಹಿಳಾ ಚೈತನ್ಯ ದಿನ’ವಾಗಿ ಆಚರಿಸುತ್ತಾ, ಮಹಿಳಾ ಜಾಗೃತಿ ಸಮಾವೇಶವನ್ನು ನಡೆಸಲಾಗುತ್ತಿದೆ.

ಇದುವರೆಗೆ ಮಂಗಳೂರು, ಮೈಸೂರು, ಬೆಂಗಳೂರು, ವಿಜಯಪುರ, ಕೊಪ್ಪಳ, ಶಿವಮೊಗ್ಗ, ಧಾರವಾಡ, ಮಂಡ್ಯ, ಕೋಲಾರ, ಕಲಬುರಗಿ, ತುಮಕೂರು, ಉಡುಪಿ, ವಿಜಯನಗರ ಜಿಲ್ಲೆಯ ಹೊಸಪೇಟೆಗಳಲ್ಲಿ ಹದಿಮೂರು ಸಮಾವೇಶಗಳನ್ನು ನಡೆಸಲಾಗಿದೆ.

ಚರಿತ್ರೆ, ಹೋರಾಟ, ಜಾಗೃತಿ, ಸಾಹಿತ್ಯ, ಕಲೆ, ಸಂಸ್ಕೃತಿಗಳ ದೃಷ್ಟಿಯಿಂದ ಸಿರಿವಂತ ಜಿಲ್ಲೆಯಾದ ಹಾಸನದಲ್ಲಿ “ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ”ವು 2026ರ “ಮಹಿಳಾ ಚೈತನ್ಯ ದಿನ”ವನ್ನು “ದೌರ್ಜನ್ಯ ಸಹಿಸುವುದಿಲ್ಲ: ನ್ಯಾಯ ದಕ್ಕದೆ ಬಿಡುವುದೇ ಇಲ್ಲ” ಎಂಬ ಘೋಷವಾಕ್ಯವನ್ನಿಟ್ಟುಕೊಂಡು ಮಾರ್ಚ್ 7 ಮತ್ತು 8ರಂದು ಬೃಹತ್ ಪ್ರಮಾಣದಲ್ಲಿ ಆಚರಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೇ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಬರೆಸಲಾಗುತ್ತಿದೆ. ಅದರ ಒಂದು ಪುಟ್ಟ ದಾಖಲೀಕರಣ ಮಾಡುವ ಉದ್ದೇಶದಿಂದ ಮಾರ್ಚ್ ಮಹಿಳಾ ಸಮಾವೇಶದಲ್ಲಿ “ಹಾಸನ ಮಣ್ಣಿನ ಹೆಣ್ಣು ದನಿಗಳು” ಎಂಬ ಪುಸ್ತಕವನ್ನು ಹೊರತರಲಾಗುತ್ತಿದೆ.

ಅದರಲ್ಲಿನ ಒಂದೊಂದೇ ಲೇಖನಗಳನ್ನು ದಿನವೂ ನಿಮಗೆ ಈ ಮೂಲಕ ಕಳಿಸಲಾಗುವುದು. ತಾವು ದಯಮಾಡಿ ತಮ್ಮ ಮಾಧ್ಯಮದಲ್ಲಿ ಅದನ್ನು ದಿನವೂ ಸರಣಿಯಾಗಿ ಪ್ರಕಟಿಸುವ ಮೂಲಕ ಹಾಸನ ಜಿಲ್ಲೆಯ ಮಹಿಳೆಯರಿಗೆ, ಅವರ ಕೆಲಸ, ಕೊಡುಗೆ, ಸಾಧನೆಗೆ ಮತ್ತು ಬರಲಿರುವ ಮಾರ್ಚ್ ಸಮಾವೇಶಕ್ಕೆ ಬೆಂಬಲ ನೀಡಬೇಕೆಂದು ಈ ಮೂಲಕ ವಿನಂತಿಸುತ್ತಿದ್ದೇವೆ.

The Karnataka State Women’s Anti-Atrocities Coalition is a network of pro-people, pro-women organizations that has been participating in pro-people struggles for the past thirteen years by organizing rallies, conferences, and awareness programs in various districts of Karnataka.