ಕೆಎಂಸಿ ಮಂಗಳೂರಿನ ರಿಯಲ್–ಟೈಮ್ ರೋಗಿ ನಿರ್ವಹಣಾ ವ್ಯವಸ್ಥೆಗೆ ಅಧಿಕೃತ ಪೇಟೆಂಟ್ ಪ್ರಕಟ: ಹಾಸನ ಮೂಲದ ಖ್ಯಾತ ವೈದ್ಯ ಡಾ.ಹಾರೂನ್ ನೇತೃತ್ವದ ತಂಡದ ಸಂಶೋಧನೆಗೆ ಮನ್ನಣೆ

Students and faculty associated with KMC Mangalore and Manipal Institute of Technology played a key role in this patented invention.

ಮಂಗಳೂರು: ಕಸ್ತೂರಬಾ ವೈದ್ಯಕೀಯ ಕಾಲೇಜು (ಕೆಎಂಸಿ), ಮಂಗಳೂರು ಹಾಗೂ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಎಂಎಎಚ್ಇ), ಮಣಿಪಾಲ್‌ನ, ಹಾಸನ ಮೂಲದ ಖ್ಯಾತ ವೈದ್ಯ ದಂಪತಿ ಡಾ.ಹಾರೂನ್ ಹಾಗೂ ಡಾ.ಸಮೀನಾ ಅವರನ್ನೊಳಗೊಂಡಸಂ ಶೋಧನಾ ತಂಡ ಅಭಿವೃದ್ಧಿಪಡಿಸಿರುವ “ರಿಯಲ್–ಟೈಮ್ ಇನ್‌ ಪೇಟೆಂಟ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಅಂಡ್ ಮೆಥಡ್ ಫಾರ್ ಎ ಮಲ್ಟಿ–ಸ್ಪೆಷಾಲಿಟಿ ಹಾಸ್ಪಿಟಲ್” ಎಂಬ ನವೀನ ತಂತ್ರಜ್ಞಾನಕ್ಕೆ ಪೇಟೆಂಟ್ ದೊರಕಿದ್ದು, ಅಧಿಕೃತ ಜರ್ನಲ್‌ನಲ್ಲಿ ಪ್ರಕಟಗೊಂಡಿದೆ.

ಈ ವ್ಯವಸ್ಥೆಯು ಆಸ್ಪತ್ರೆಗಳಲ್ಲಿ ರೋಗಿಗಳ ರಿಯಲ್–ಟೈಮ್ ಮೇಲ್ವಿಚಾರಣೆ, ಸ್ಮಾರ್ಟ್ ಎಚ್ಚರಿಕೆ ವ್ಯವಸ್ಥೆ, ರಚನಾತ್ಮಕ ರೆಫರಲ್ ವ್ಯವಸ್ಥೆ, ತುರ್ತು ಪ್ರಕರಣಗಳಿಗೆ ಆದ್ಯತೆ ನಿರ್ಧಾರ ಹಾಗೂ ಸ್ವಯಂಚಾಲಿತ ಡಿಸ್ಚಾರ್ಜ್ ಸಾರಾಂಶಗಳು ಸೇರಿದಂತೆ ಹಲವು ಅಂಶಗಳನ್ನು ಒಳಗೊಂಡಿದ್ದು, ಚಿಕಿತ್ಸಾ ಕಾರ್ಯಕ್ಷಮತೆ ಹೆಚ್ಚಿಸುವುದರ ಜತೆಗೆ ರೋಗಿ ಸುರಕ್ಷತೆಯನ್ನು ಬಲಪಡಿಸುವ ಗುರಿ ಹೊಂದಿದೆ.

ಈ ಪೇಟೆಂಟ್ ಪಡೆದ ಆವಿಷ್ಕಾರದಲ್ಲಿ ಕೆಎಂಸಿ ಮಂಗಳೂರು ಮತ್ತು ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯೊಂದಿಗೆ ಸಂಬಂಧ ಹೊಂದಿರುವ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಪ್ರಮುಖ ಪಾತ್ರ ವಹಿಸಿದ್ದಾರೆ

ಸಂಶೋಧನಾ–ಚಾಲಿತ ಆರೋಗ್ಯ ಸಂರಕ್ಷಣಾ ಪರಿಹಾರಗಳ ಅಭಿವೃದ್ಧಿಗೆ ಸಂಸ್ಥೆಗಳು ನೀಡುತ್ತಿರುವ ಒತ್ತಾಸೆಯನ್ನು ಈ ಸಾಧನೆ ಪ್ರತಿಬಿಂಬಿಸುತ್ತದೆ.

ಈ ಕುರಿತು ‘ಕನ್ನಡ ಪೋಸ್ಟ್’ ನೊಂದಿಗೆ ಮಾತನಾಡಿದ ಡಾ. ಎಚ್. ಹಾರೂನ್ ಅವರು, “ಈ ಮಹತ್ವದ ಮೈಲಿಗಲ್ಲಿನ ಭಾಗವಾಗಿರುವುದು ನನಗೆ ಹೆಮ್ಮೆಯ ವಿಷಯ. ಇದು ನಿಜವಾದ ಅಂತರಶಾಸ್ತ್ರೀಯ ಸಹಯೋಗ, ದೃಷ್ಟಿಕೋನಗಳ ಸಂಯೋಜನೆ ಹಾಗೂ ರಿಯಲ್–ಟೈಮ್ ರೋಗಿ ಚಿಕಿತ್ಸೆ ಮತ್ತು ಸುರಕ್ಷತೆಯನ್ನು ಸುಧಾರಿಸಲು ನಡೆಸಿದ ನಿರಂತರ ಪ್ರಯತ್ನಗಳ ಫಲವಾಗಿದೆ” ಎಂದು ಹೇಳಿದರು.

ಪೇಟೆಂಟ್ ಅಭಿವೃದ್ಧಿಯಲ್ಲಿ ಶ್ರೀ ಸುಚಿತ್ ಗುಪ್ತಾ, ಶ್ರೀ ಅರ್ನವ್ ಜಾಗಿಯಾ, ಶ್ರೀ ಆಕಾಶ್ ಭಾಟಿಯಾ, ಶ್ರೀ ಶುಭಮ್ ಭುಸಾರಿ, ಡಾ. ಮೋಹನ್ ದಾಸ್ ಶೆಣೈ, ಡಾ. ರೋಶನ್ ಡೇವಿಡ್ ಜಥನ್ನ, ಡಾ. ಪಿ.ಸಿ. ಸಿದ್ದಲಿಂಗಸ್ವಾಮಿ, ಡಾ. ಸಮೀನಾ ಎಚ್. ಹಾಗೂ ಡಾ. ಅಹಮ್ಮದ್ ಮಹಶೂಕ್ ಎಂ.ಕೆ. ಅವರು ತಮ್ಮ ಅಮೂಲ್ಯ ಕೊಡುಗೆ ನೀಡಿದ್ದಾರೆ.

ಕ್ಲಿನಿಷಿಯನ್–ನೇತೃತ್ವದ ನಾವೀನ್ಯತೆ ಹಾಗೂ ಅಂತರಶಾಸ್ತ್ರೀಯ ಸಹಯೋಗವನ್ನು ಉತ್ತೇಜಿಸುವ ಶಕ್ತಿಶಾಲಿ ಶೈಕ್ಷಣಿಕ ಮತ್ತು ಸಂಶೋಧನಾ ವಾತಾವರಣವನ್ನು ಒದಗಿಸಿರುವ ಕೆಎಂಸಿ ಮಂಗಳೂರು ಹಾಗೂ ಎಂಎಎಚ್ಇ ಮಣಿಪಾಲ್‌ಗೆ ಡಾ. ಹಾರೂನ್ ಅವರು ಕೃತಜ್ಞತೆ ಸಲ್ಲಿಸಿದರು.

ಈ ಸಾಧನೆ ಡಿಜಿಟಲ್ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ಭವಿಷ್ಯದಲ್ಲಿ ಆರೋಗ್ಯ ಸಂರಕ್ಷಣಾ ವ್ಯವಸ್ಥೆಗಳನ್ನು ಮತ್ತಷ್ಟು ಬಲಪಡಿಸುವಲ್ಲಿ ಹಾಗೂ ರೋಗಿಗಳ ಫಲಿತಾಂಶಗಳನ್ನು ಸುಧಾರಿಸುವಲ್ಲಿ ನೆರವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

Students and faculty associated with KMC Mangalore and Manipal Institute of Technology played a key role in this patented invention.