5.8 C
Munich
Home News ಎಲ್ಲ ಪಕ್ಷಗಳ ಹಿರಿಯ ನಾಯಕರು ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ; ಬಿಜೆಪಿಗರ ವಿರುದ್ಧವೂ ಪ್ರತಾಪ್ ಸಿಂಹ ಅಸಮಾಧಾನ

ಎಲ್ಲ ಪಕ್ಷಗಳ ಹಿರಿಯ ನಾಯಕರು ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ; ಬಿಜೆಪಿಗರ ವಿರುದ್ಧವೂ ಪ್ರತಾಪ್ ಸಿಂಹ ಅಸಮಾಧಾನ

ಹಾಸನ : ಎಲ್ಲ ಪಕ್ಷಗಳ ಸೀನಿಯರ್ ಲೀಡರ್ಸ್ ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್ ನಲ್ಲಿದ್ದಾರೆ ಎಂದು‌ ಸ್ವಪಕ್ಷೀಯರ ವಿರುದ್ಧವೇ ಮಾಜಿ ಸಂಸದ ಪ್ರತಾಪ್ ಸಿಂಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದ ಕಲಾಭವನದಲ್ಲಿ ಪ್ರತಿಷ್ಠಾಪಿಸಿರುವ ಪಾಂಚಜನ್ಯ ಹಿಂದು ಗಣಪತಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ನಾನು ಈಗಾಗಲೇ ರಾಜ್ಯ ರಾಜಕಾರಣದಲ್ಲಿ ಇದ್ದೀನಿ. ಮೈಸೂರು ನನ್ನ ಕರ್ಮ ಭೂಮಿ, ಅಲ್ಲೇ ಇರ್ತಿನಿ, ಅಲ್ಲೇ ರಾಜಕಾರಣ ಮಾಡ್ತಿನಿ. ನಾನು ಆ ಪಕ್ಷ, ಈ ಪಕ್ಷ ಅಂಥ ಹೇಳ್ತಿಲ್ಲಾ. ಎಲ್ಲಾ ಪಕ್ಷದ ಸೀನಿಯರ್ ಲೀಡರ್ಸ್ ಅಡ್ಜಸ್ಟ್‌ಮೆಂಟ್ ಪಾಲಿಟಿಕ್ಸ್‌ನಲ್ಲಿ ಇದ್ದಾರೆ ಎಂದು ಸ್ವ ಪಕ್ಷದ ನಾಯಕರ ವಿರುದ್ಧವೇ ಬೇಸರ ವ್ಯಕ್ತಪಡಿಸಿದರು.

ಮುಡಾದಲ್ಲಿ ಬಿಜೆಪಿ-ಜೆಡಿಎಸ್ ನವರದ್ದೂ ಇದೆ. ಕಾಂಗ್ರೆಸ್‌ನವರು ಏಕೆ ಬಿಡ್ತಿಲ್ಲ. ಅವರು ಮಾಡಿರುವ ಆರೋಪಗಳಿಗೆ ಕಾಂಗ್ರೆಸ್‌ನವರು ಒಂದು ಸಾಕ್ಷಿನಾದರೂ ಕೊಟ್ಟಿದ್ದಾರೆಯೇ? ತನಿಖಾ ಏಜೆನ್ಸಿ ಅವರ ಹತ್ತಿರವೇ ಇದೆ. ಆಡಳಿತ, ಪೊಲೀಸ್ ವ್ಯವಸ್ಥೆ ಅವರ ಬಳಿಯೇ ಇದೆ. 40% ಹಗರಣದ ಬಗ್ಗೆ ತನಿಖೆ ಮಾಡಿಸಿ, ಪಿಎಸ್‌ಐ ಹಗರಣದ ಬಗ್ಗೆ ಏಕೆ ತನಿಖೆ ಮಾಡಿಸುತ್ತಿಲ್ಲ? ಎಂದು ಪ್ರಶ್ನಿಸಿದರು.

ಪ್ರಿಯಾಂಕ್ ಖರ್ಗೆ,  ನನ್ನ ಹತ್ರ ದಾಖಲೆ‌ ಇದೆ ಅಂತ ಹೇಳಿಕೆ‌ ಕೊಟ್ಟಿದ್ರಲ್ಲಾ… ಕೊಡಪ್ಪ ಇವಾಗ, ಇಟ್ಕಂಡು ಏನು ಮಾಡುತ್ತಿದ್ದೀರಾ? ಕರ್ನಾಟಕ ಸರ್ಕಾರವೇ ನಿಮ್ಮ ಕೈಯಲ್ಲಿ ಇದೆ. ಯಾವ್ಯಾವ ಹಗರಣದ ಇದೆ ಎಲ್ಲಾ ತೆಗೆದುಕೊಂಡು ಬನ್ನಿ ಹಿರಿಯ ರಾಜಕಾರಣಿಗಳು ಏನಿದ್ದೀರಿ ಒಬ್ಬಬ್ಬರೊನ್ನು ಒಬ್ಬೊಬ್ಬರು ಎಕ್ಸ್‌ಪೋಸ್ ಮಾಡಿಕೊಳ್ಳಿ ಮುಂದಿನ ಪೀಳಿಗೆಗಾದರೂ ಒಳ್ಳೆಯ ಜನನಾಯಕರು ಬರಲು ಅನುಕೂಲವಾಗುತ್ತದೆ ಎಂದರು.

error: Content is protected !!