ನಟ ಕಿಚ್ಚ ಸುದೀಪ್ ಅವರ ಬಾವ ರಂಜಿತ್ ರಾಧಾಕೃಷ್ಣನ್ ರಚನೆಯ ‘Blade of Fury’ ಕೃತಿಯ ಕನ್ನಡ ಅವತರಣಿಕೆ ‘ಅಂಶ – ಪರಶುರಾಮನ ಶೌರ್ಯಗಾಥೆ’ ನಿನ್ನೆ ರಾಜ್ಯೋತ್ಸವದಂದು ಬಿಡುಗಡೆಯಾಗಿದೆ. ‘ರೇಣುಕಾ ಜಮದಗ್ನಿ- ಪರಶುರಾಮರ ಕಥೆಯನ್ನು ಈ ನಾಡಿನಲ್ಲಿ ಕೇಳದವರು ಕಡಿಮೆ. ಪುರಾಣದ ಕಥೆಗಳು ಭಕ್ತಿಯ ದೃಷ್ಟಿಯಿಂದ ಪುನರ್ ಪಠಣವಾಗುವ ಅದರ ಜೊತೆಗೆ ಪುನರ್ಮನನ ಆಗುವುದು ಈ ನೆಲದ ಮಹಿಮೆ. ಈ ಕೃತಿಯಲ್ಲೂ ಅದನ್ನು ಸಾಧ್ಯವಾಗಿಸುವ ಪ್ರಯತ್ನ ನಡೆದಿದೆ’ ಎನ್ನುತ್ತಾರೆ ಕೃತಿಕಾರ ರಂಜಿತ್ ರಾಧಾಕೃಷ್ಣನ್. ಅವರ ಈ ಕೃತಿಯನ್ನು ಕನ್ನಡಕ್ಕೆ ಅನುವಾದ ಮಾಡಿರುವವರು ಅಮೂಲ್ಯ ಎಸ್ ಪ್ರಮೋದ್. ಕೃತಿಯ ಬಗ್ಗೆ ಮಾತನಾಡಿರುವ ನಟ ಸುದೀಪ್, ‘ಪದಪದವೂ ರೋಮಾಂಚಕ ಹಾಗೂ ಮಾಂತ್ರಿಕವೆನಿಸುವ ಕೌತುಕಮಯ, ಕುಶಾಲತೆಯ ನಿರೂಪಣೆ. ಅದ್ಭುತ ಕತೆ’ ಎಂದಿದ್ದಾರೆ. ಇದೇ ನವೆಂಬರ್ 20ರಿಂದ ಅಮೇಜಾನ್ನಲ್ಲಿ ಈ ಕೃತಿ ಲಭ್ಯವಾಗಲಿದೆ.











