ಸಕಲೇಶಪುರ: ಸಮನ್ವಯದ ಕೊರತೆಯೆ ಸಮಸ್ಯೆಗಳ ಮೂಲ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಸೋಮವಾರ ತಾಲೂಕು ನೌಕರರ ಸಂಘದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಂಘದ ಕಚೇರಿಯ ಕಾಮಗಾರಿಗೆ ಇರುವ ಅಡ್ಡಿಗಳಿಗೆ ಇಲಾಖೆಗಳ ಮದ್ಯೆ ಇರುವ ಸಮನ್ವಯದ ಕೊರತೆ ಕಾರಣವಾಗಿದೆ.
ಪರಸ್ಪರ ಹೊಂದಾಣಿಕೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವತ್ತ ಅಧಿಕಾರಿಗಳು ಗಮನಹರಿಸ ಬೇಕು. ಕಟ್ಟಡ ಕಾಮಗಾರಿಗೆ ಶಾಸಕರ ನಿಧಿಯಿಂದ ಐದು ಲಕ್ಷರೂ ನೀಡುವುದಾಗಿ ತಿಳಿಸಿದರು.
ಅಧಿಕಾರಿಗಳಿಗೆ ತಾಲೂಕಿನಲ್ಲಿ ಕೆಲಸ ಮಾಡಲು ಸ್ನೇಹಮಹಿ ವಾತವಾರಣ ಸೃಷ್ಟಿಸಲಾಗಿದೆ ಎಂದರು. ಈ ವೇಳೆ ತಾಲೂಕು ನೌಕರರ ಸಂಘದ ಅಧ್ಯಕ್ಷ ತಮ್ಮಣ್ಣಶೆಟ್ಟಿ, ಕಾರ್ಯದರ್ಶಿ ಜಗದೀಶ್ ಮುಂತಾದವರಿದ್ದರು.










