20.1 C
Munich
Home ಕ್ರೈಮ್‌ ಬೇಲೂರು: ಡಿಪೋ ಮ್ಯಾನೇಜರ್ ಕಿರುಕುಳ ಆರೋಪ-ವಿಷ ಸೇವಿಸಿದ KSRTC ಬಸ್ ಚಾಲಕ

ಬೇಲೂರು: ಡಿಪೋ ಮ್ಯಾನೇಜರ್ ಕಿರುಕುಳ ಆರೋಪ-ವಿಷ ಸೇವಿಸಿದ KSRTC ಬಸ್ ಚಾಲಕ

Harish, a driver from Kotiganahalli in Belur Taluk, who was working at the KSRTC unit in Belur, attempted suicide by consuming poison within the depot premises.

ಬೇಲೂರು, ಜುಲೈ 07: ಬೇಲೂರು ಕೆಎಸ್ಆರ್ಟಿಸಿ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬೇಲೂರು ತಾಲೂಕು ಕೋಟಿಗನಹಳ್ಳಿ, ಮೂಲದ ಚಾಲಕ ಹರೀಶ್ ಡಿಪೋ ಆವರಣದಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಇಂದು ಬೆಳಗ್ಗೆ 6:30ರ ಸುಮಾರಿಗೆ ಘಟಕದಲ್ಲಿ ಅವರು  ಮ್ಯಾನೇಜರ್ ಶಹೀಜಾ ಭಾನು ಅವರ ಕಿರುಕುಳ ಆಗುತ್ತಿದೆ ಎಂದು ಆರೋಪಿಸಿ  ವಿಷ ಸೇವಿಸಿದ್ದಾರೆ.

14 ವರ್ಷಗಳಿಂದ ಕೆಎಸ್ಆರ್ಟಿಸಿಯಲ್ಲಿ ಚಾಲಕನಾಗಿ ಸೇವೆ ಸಲ್ಲಿಸುತ್ತಿರುವ ಹರೀಶ್, ಮ್ಯಾನೇಜರ್‌ರಿಂದ ಸತತ ಕಿರುಕುಳಕ್ಕೆ ಒಳಗಾಗಿದ್ದರು ಎಂದು ಆರೋಪಿಸಲಾಗಿದೆ. ವಿಷ ಸೇವಿಸಿ ಅಸ್ವಸ್ಥಗೊಂಡ ಹರೀಶ್‌ಗೆ ಬೇಲೂರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

error: Content is protected !!