6.9 C
Munich
Home ಕ್ರೈಮ್‌ ಕುಂಭಮೇಳಕ್ಕೆ ಹೊರಟಿದ್ದ ಕಾರು ವಾರಣಾಸಿ ಬಳಿ ಅಪಘಾತ: ಬಿಜೆಪಿ ಯುವಮೋರ್ಚಾ ಮುಖಂಡ ನಿತಿನ್ ಸ್ಥಳದಲ್ಲೇ ಸಾವು

ಕುಂಭಮೇಳಕ್ಕೆ ಹೊರಟಿದ್ದ ಕಾರು ವಾರಣಾಸಿ ಬಳಿ ಅಪಘಾತ: ಬಿಜೆಪಿ ಯುವಮೋರ್ಚಾ ಮುಖಂಡ ನಿತಿನ್ ಸ್ಥಳದಲ್ಲೇ ಸಾವು

ಹಾಸನ, ಫೆಬ್ರವರಿ 20: ಕುಂಭಮೇಳಕ್ಕೆ ತೆರಳುತ್ತಿದ್ದ ಹಾಸನ ಜಿಲ್ಲೆ ಮೂಲದ ಕುಟುಂಬವೊಂದರ ಕಾರು ಅಪಘಾತಕ್ಕೀಡಾಗಿ ಬಿಜೆಪಿ ಮುಖಂಡರೊಬ್ಬರು ಮೃತಪಟ್ಟು ಮೂವರು ಗಾಯಗೊಂಡ ಘಟನೆ ಉತ್ತರ ಪ್ರದೇಶದ ವಾರಣಾಸಿ ಸಮೀಪ ನಡೆದಿದೆ.

ಘಟನೆ ವಿವರ:
ನಿತಿನ್ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳದ ನಿತಿನ್ (30) ಮೃತ ರಾಗಿದ್ದು, ಅವರ ತಾಯಿ ಪುಷ್ಪ ಗಂಭೀರವಾಗಿ ಗಾಯಗೊಂಡಿದ್ದಾರೆ.

ತಾಯಿ ಪುಷ್ಪ ಅವರೊಂದಿಗೆ ನಿತಿನ್

ನಿತಿನ್ ಕುಟುಂಬದೊಂದಿಗೆ ಕುಂಭಮೇಳಕ್ಕೆ ತೆರಳುತ್ತಿದ್ದು, ಅವರ ಕಾರಿಗೆ ಅಚಾನಕ್ ಲಾರಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ನಿತಿನ್ ಸ್ಥಳದಲ್ಲೇ ಮೃತಪಟ್ಟರು. ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಇಬ್ಬರು ಕುಟುಂಬ ಸದ್ಯರಿಗೆ ಗಾಯಗಳಾಗಿದ್ದು, ಅವರ ಪರಿಸ್ಥಿತಿಯು ಸ್ಥಿರವಾಗಿದೆ ಎಂದು ವರದಿಯಾಗಿದೆ.

error: Content is protected !!