13.5 C
Munich
Home News Politics ಕೇಂದ್ರದ ಸಂವಿಧಾನ ವಿರೋಧಿ ಚಟುವಟಿಕೆ ವಿರುದ್ಧ ರಾಜ್ಯಕ್ಕೆ ಸಂದೇಶ ರವಾನಿಸಲು ಹಾಸನದಲ್ಲಿ ಸ್ವಾಭಿಮಾನಿ ಸಮಾವೇಶ; ಯತೀಂದ್ರ...

ಕೇಂದ್ರದ ಸಂವಿಧಾನ ವಿರೋಧಿ ಚಟುವಟಿಕೆ ವಿರುದ್ಧ ರಾಜ್ಯಕ್ಕೆ ಸಂದೇಶ ರವಾನಿಸಲು ಹಾಸನದಲ್ಲಿ ಸ್ವಾಭಿಮಾನಿ ಸಮಾವೇಶ; ಯತೀಂದ್ರ ಸಿದ್ದರಾಮಯ್ಯ

ವಕ್ಫ್ ಒಂದು ವಿಚಾರ ವಿವಾದವೇ ಅಲ್ಲ.‌ಅವರ ಕಾಲದಲ್ಲೇ ವಕ್ಫ್ ಗೆ ‌ಹೆಚ್ಚು ಆಸ್ತಿ ನೀಡಿದ್ದಾರೆ. ನಮ್ಮ ನಿಲುವು ಸಂವಿಧಾನ, ಪ್ರಗತಿಪರ, ಜಾತ್ಯಾತೀತ ಪರವಾಗಿ ಇರುತ್ತದೆ.

ಹಾಸನ: ದೇಶದಲ್ಲಿ ಕೋಮುವಾದ, ಸಂವಿಧಾನ ವಿರೋಧಿ ಚಟುವಟಿಕೆ ಜಾಸ್ತಿಯಾಗಿದೆ. ಕೇಂದ್ರ ತನಿಖಾ ಸಂಸ್ಥೆಗಳನ್ನು ಉಪಯೋಗಿಸಿಕೊಂಡು ವಾಮಮಾರ್ಗವಾಗಿ ಸರ್ಕಾರಗಳನ್ನು ಬೀಳಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದ್ದು ಇಡೀ ರಾಜ್ಯಕ್ಕೆ ಸಂದೇಶ ಹೋಗಬೇಕು ಎಂಬ ನಿಟ್ಟಿನಲ್ಲಿ ಹಾಸನದಲ್ಲಿ ಸ್ವಾಭಿಮಾನಿ ಸಮಾವೇಶ ಆಯೋಜಿಸಲಾಗಿದೆ ಎಂದು‌ ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ನಗರದ ಎಸ್.ಎಂ.ಕೃಷ್ಣ ಬಡಾವಣೆಯಲ್ಲಿನ ಸ್ವಾಭಿಮಾನಿ ಸಮಾವೇಶ ಆಯೋಜನೆ ಸ್ಥಳದಲ್ಲಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕರ್ನಾಟಕದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರು ಗೆದ್ದು ಬಂದಂತಹ ಕಾಂಗ್ರೆಸ್ ಸರ್ಕಾರವಿದೆ.ಕೇಂದ್ರ ತನಿಖಾ ಸಂಸ್ಥೆಗಳು, ರಾಜ್ಯಪಾಲರ ಕಚೇರಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ವಕ್ಫ್ ಒಂದು ವಿಚಾರ ವಿವಾದವೇ ಅಲ್ಲ.‌ಅವರ ಕಾಲದಲ್ಲೇ ವಕ್ಫ್ ಗೆ ‌ಹೆಚ್ಚು ಆಸ್ತಿ ನೀಡಿದ್ದಾರೆ. ನಮ್ಮ ನಿಲುವು ಸಂವಿಧಾನ, ಪ್ರಗತಿಪರ, ಜಾತ್ಯಾತೀತ ಪರವಾಗಿ ಇರುತ್ತದೆ. ರಾಜ್ಯದಾದ್ಯಂತ ಇಂತಹ ಸಮಾವೇಶ ಮಾಡಬೇಕು ಎಂಬ ಒತ್ತಾಯವಿದೆ. ಇಡೀ ರಾಜ್ಯಕ್ಕೆ ಸಂದೇಶ ಹೋಗಬೇಕು ಎಂದು ಮೈಸೂರು ಬಿಟ್ಟು ಬೇರೆ ಕಡೆ ಮಾಡಲು ಸಚಿವರು ತೀರ್ಮಾನ ಮಾಡಿದ್ದರು. ಹೀಗಾಗಿ ಹಾಸನದಲ್ಲಿ ಎಲ್ಲಾ ಸಂಘಟನೆಗಳು ಒಗ್ಗೂಡಿ ಈ ಸಮಾವೇಶ ಮಾಡುತ್ತಿದ್ದಾರೆ ಎಂದರು.

error: Content is protected !!