15.1 C
Munich
Home News ಆಲೂರು ಶಿಕ್ಷಕರ ಸಂಘಕ್ಕೆ ಅವಿರೋಧ ಆಯ್ಕೆ: ಎಂ.ಆರ್. ಶ್ರೀನಿವಾಸ್ ಅಧ್ಯಕ್ಷರಾಗಿ ಆಯ್ಕೆ

ಆಲೂರು ಶಿಕ್ಷಕರ ಸಂಘಕ್ಕೆ ಅವಿರೋಧ ಆಯ್ಕೆ: ಎಂ.ಆರ್. ಶ್ರೀನಿವಾಸ್ ಅಧ್ಯಕ್ಷರಾಗಿ ಆಯ್ಕೆ

ಆಲೂರು ತಾಲ್ಲೂಕು ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮ
ಆಲೂರಿನಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಜೆ. ಕೃಷ್ಣೇಗೌಡ ಶುಭಾಶಯ ಕೋರಿದರು.

ಆಲೂರು ತಾಲ್ಲೂಕು ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 2026-2031 ಅವಧಿಗೆ ನೂತನ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಂ.ಆರ್. ಶ್ರೀನಿವಾಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಜೆ. ಕೃಷ್ಣೇಗೌಡ ಅಭಿನಂದಿಸಿದರು.

ಆಲೂರು,ಜೂನ್ 5,(www.kannadapost.com):ಆಲೂರು ತಾಲ್ಲೂಕು ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಪದಾಧಿಕಾರಿಗಳ ಅವಿರೋಧ ಆಯ್ಕೆ : ಕ್ಷೇತ್ರ ಶಿಕ್ಷಣಾಧಿಕಾರಿ ಎ.ಜೆ.ಕೃಷ್ಣೇಗೌಡ ಅಭಿನಂದನೆ ಆಲೂರು : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಸಮಸಮಾಜ ಆಯ್ಕೆಯ ಸಂಕೇತ. ಸಂವಿಧಾನ ಆಶಯಗಳಡಿಯಲ್ಲಿ ಪರಸ್ಪರ ಚರ್ಚಿಸಿ ಮನಸ್ತಾಪವಿಲ್ಲದಂತೆ ಪದಾಧಿಕಾರಿಗಳನ್ನು ಆಯ್ಕೆ ಮಾಡುವುದು ಧನಾತ್ಮಕ ಅಂಶ ಹಾಗೂ ಮಾದರಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಜೆ. ಕೃಷ್ಣೇಗೌಡ ಅಭಿಪ್ರಾಯಪಟ್ಟರು. ಅವರು ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಆಲೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಿಗೆ ಗೌರವಿಸಿ ಮಾತನಾಡಿ ನೌಕರರಿಗೆ ತಮ್ಮದೇಯಾದ ಸಂಘಟನೆ ಮುಖ್ಯ.

ನೌಕರರ ಕಷ್ಟಕಾರ್ಪಣ್ಯಗಳಿಗೆ ಕಾನೂನು ಚೌಕಟ್ಟಿನಲ್ಲಿ, ಇಲಾಖಾ ಆದೇಶಗಳ ಅಡಿಯಲ್ಲಿ ನೆರವಾಗುವ ನಿಟ್ಟಿನಲ್ಲಿ ಸಂಘಟನೆ ಕಾರ್ಯನಿರ್ವಹಿಸಬೇಕು. ಪದಾಧಿಕಾರಿಗಳಿಗೆ ಸಂಯಮ ಮತ್ತು ಸಮತೋಲಿತ ಮನೋಭಾವ ಬಹಳ ಮುಖ್ಯ. ಹಲವು ಮನೋಸ್ಥಿತಿಯ ನೌಕರರನ್ನು ಒಗ್ಗೂಡಿಸಿಕೊಂಡು ಸಾಗಬೇಕಾಗುತ್ತದೆ. ಅನುಭವಿಗಳ ಜೊತೆ ಹೊಸ ಮುಖಗಳ ಯುವಪಡೆ ಆಯ್ಕೆಯಾಗಿರುವುದರಿಂದ ಶಿಕ್ಷಕರ ನಿರೀಕ್ಷೆಯಂತೆ ಕಾರ್ಯನಿರ್ವಹಿಸಬೇಕು ಎಂಬ ಕಿವಿ ಮಾತುಗಳಾಡಿ, ನೂತನ ಪದಾಧಿಕಾರಿಗಳಿಗೆ ಶುಭಕೋರಿದರು.

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಿ.ಎಂ. ವರದರಾಜು ಮಾತನಾಡಿ ಶಿಕ್ಷಕರ ನಡುವೆ ಉದ್ವಿಘ್ನವಾಗುತ್ತಿದ್ದ ಗುಂಪುಗಾರಿಕೆಯ ಈರ್ಶೆಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ರಾಜೇಂದ್ರ, ಎಂ.ಬಿ.ಅಮೃತೇಶ, ಬಿ.ಆರ್.ಧರ್ಮ, ಸಿ.ಎಸ್.ಅಣ್ಣಪ್ಪ, ಚಂದ್ರಮ್ಮ ಸೇರಿದಂತೆ ಹಲವು ಹಿರಿಯ ನಾಯಕರುಗಳ ನೇತೃತ್ವದಲ್ಲಿ ಸಮಾನ ಮನಸ್ಸಿನಿಂದ ರೋಸ್ಟರ್ ವಾರು ಸಂವಿಧಾನ ಆಶಯದಂತೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದೇವೆ. ಇಲಾಖೆ ಹಾಗೂ ಸಂಘಟನೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಇಲಾಖೆ ಸಂಘಕ್ಕೂ ಸ್ಪಂದಿಸಬೇಕು, ಸಂಘ ಇಲಾಖೆಯ ಶ್ರೇಯೋಭಿವೃದ್ಧಿಗೂ ಸ್ಪಂದಿಸುತ್ತದೆ ಎಂದರು.

ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಆಲೂರು ತಾಲ್ಲೂಕು ನೂತನ ಅಧ್ಯಕ್ಷೆ ಎಂ.ಆರ್.ಶ್ರೀನಿವಾಸ್ ಮಾತನಾಡಿ ಕಳೆದ ಬಾರಿ ತಾಲ್ಲೂಕು ಕಾಯ್ದರ್ಶಿಯಾಗಿ ಅಧ್ಯಕ್ಷರಾದ ಎಂ.ಬಿ.ಅಮೃತೇಶ್ ಮಾರ್ಗದರ್ಶನದಲ್ಲಿ ಕೆಲಸ ನಿರ್ವಹಿಸಿದ್ದೇನೆ. ನನ್ನ ಮೇಲೆ ಭರವಸೆಯಿಟ್ಟು ಈ ಬಾರಿ ಅವಿರೋದ ಆಯ್ಕೆಗೆ ಸ್ಪಂದಿಸಿ ಪ್ರಥಮಾವಧಿಯಲ್ಲಿ ಅಧ್ಯಕ್ಷನನ್ನಾಗಿ ಮಾಡಿ ಮಹತ್ತರ ಜವಬ್ದಾರಿ ನೀಡಿರುವ ತಾಲ್ಲೂಕಿನ ಹಿರಿಯ ನಾಯಕರು ಹಾಗೂ ಆಲೂರು ತಾಲ್ಲೂಕಿನ ಸಮಸ್ತ ಶಿಕ್ಷಕ ಬಂಧುಗಳಿಗೆ ನಾನು ಚಿರ ಋಣಿಯಾಗಿದ್ದೇನೆ. ನಿಮ್ಮೆಲ್ಲರ ನಿರೀಕ್ಷೆಯಂತೆ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಪಂದಿಸಿ ಕಾಯ, ವಾಚಾ, ಮನಸಾ ಕಾರ್ಯನಿರ್ವಹಿಸುತ್ತೇನೆ. ಶಿಕ್ಷಕರ ನೋವು ನಲಿವುಗಳಿಗೆ ಜೊತೆಯಾಗಿರುತ್ತೇನೆ ಎಂದು ಆಶಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ವಿಜಯಕುಮಾರ, ನೌಕರರ ಸಂಘದ ಗೌರವಾಧ್ಯಕ್ಷ ಬಿ.ಆರ್. ಧರ್ಮ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಗೌರವಾಧ್ಯಕ್ಷ ಚೆನ್ನಿಗರಾಮಯ್ಯ, ನೌಕರರ ಸಂಘದ ನಿರ್ದೇಶಕ ವೈ.ಆರ್. ರವಿ, ನಿಕಟಪೂರ್ವ ಅಧ್ಯಕ್ಷ ಎಂ.ಬಿ.ಅಮೃತೇಶ, ಮಾಜಿ ಕಾರ್ಯದರ್ಶಿ ಸಿ.ಎಸ್.ಅಣ್ಣಪ್ಪ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷೆ ಚಂದ್ರಮ್ಮ, ಶಿಕ್ಷಕರಾದ ಎಚ್.ಪಿ. ಜಯಣ್ಣ, ಬಿ.ಎಸ್. ಪರಮೇಶ್, ಎಸ್. ಚೈತ್ರ, ವೀಣಾ, ವಸಂತ, ಎಂ.ಬಿ.ಕುಮಾರ್, ಎಚ್.ಡಿ.ಕುಮಾರ್, ಎಂ.ಬಿ.ಮಹೇಶ, ಮೋಹನಕುಮಾರ್, ಭೂಪಾಲಯ್ಯ, ಆರ್.ಶಿವರಾಂ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ೨೦೨೬-೨೦೩೧ ರ ಅವಧಿಯ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆಲೂರು ತಾಲ್ಲೂಕು ಘಟಕಕ್ಕೆ ಆಯ್ಕೆಯಾದ ನೂತನ ಪದಾಧಿಕಾರಿಗಳು ಅಧ್ಯಕ್ಷರಾಗಿ ಎಂ.ಆರ್. ಶ್ರೀನಿವಾಸ, ಉಪಾಧ್ಯಕ್ಷರಾಗಿ ಎಂ.ಆರ್. ವೇಣುಗೋಪಾಲ, ಮಹಿಳಾ ಉಪಾಧ್ಯಕ್ಷರಾಗಿ ವಿ.ರವಿತ, ಖಜಾಂಚಿಯಾಗಿ ಎಚ್.ಡಿ.ಸೋಮೇಶ್, ಕಾರ್ಯದರ್ಶಿಯಾಗಿ ಸಿ.ಎಸ್.ಪ್ರವೀಣಕುಮಾರ್, ಸಹ ಕಾರ್ಯದರ್ಶಿಯಾಗಿ ಬೇಬಿ ಹಾಜಿರಾ ಅವರುಗಳು ಅವಿರೋಧವಾಗಿ ಆಯ್ಕೆಯಾದರು.

error: Content is protected !!