4.2 C
Munich
Home News ಹಾಸನ: ಜೆಡಿಎಸ್‌ ರಜತ ಮಹೋತ್ಸವಕ್ಕೆ ಜೆಪಿ ಭವನದಲ್ಲಿ ಭರ್ಜರಿ ಸಿದ್ಧತೆ

ಹಾಸನ: ಜೆಡಿಎಸ್‌ ರಜತ ಮಹೋತ್ಸವಕ್ಕೆ ಜೆಪಿ ಭವನದಲ್ಲಿ ಭರ್ಜರಿ ಸಿದ್ಧತೆ

MLA A. Manju said that a silver jubilee celebration will be held at JP Bhavan in Bengaluru on November 22 to mark the 25th anniversary of the Janata Dal (Secular) party.

filter: 0; fileterIntensity: 0.0; filterMask: 0; hdrForward: 0; highlight: true; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.2991663, 0.7310418);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: -1;weatherinfo: null;temperature: 35;

ಹಾಸನ: ಜಾತ್ಯಾತೀತ ಜನತದಾಳ (ಜೆಡಿಎಸ್) ಗೆ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನ. 22 ರಂದು ಬೆಂಗಳೂರಿನ ಜೆಪಿ ಭವನದಲ್ಲಿ ರಜತ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಎ.ಮಂಜು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಬುಧವಾರ ಮಾತನಾಡಿ, ಪಕ್ಷ ಸಂಘಟನೆಗಾಗಿ ದುಡಿದವರಿಗೆ ಗೌರವಿಸಲಾಗುತ್ತದೆ. ನ. 21 ರಂದು ದ್ವಜಾರೋಹಣ, ಸಂಜೆ 6.30ಕ್ಕೆ ರಾಜ್ಯ, ರಾಷ್ಟ್ರೀಯ ಪರಿಷತ್ ಸಭೆ ಇರಲಿದೆ. ನ. 22ಕ್ಕೆ ರಜತ ಮಹೋತ್ಸವ ನೆರವೇರಲಿದೆ ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್. ಲಿಂಗೇಶ್ ಮಾತನಾಡಿ, ಜೆಡಿ ಎಸ್ ‌ಒಂದು ಜಾತಿಗೆ ಸೀಮಿತವಾದ ಪಕ್ಷವಲ್ಲ. ಎಲ್ಲಾ ಜಾತಿ, ಧರ್ಮಗಳನ್ನು ಒಳಗೊಂಡ ಪಕ್ಷವಾಗಿದೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಯಾವ ಸಂದರ್ಭದಲ್ಲೂ ವಿರಮಿಸದೆ ಕೆಲಸ ಮಾಡಿದ್ದಾರೆ.‌ ನೆಲ‌-ಜಲ ವಿಷಯದಲ್ಲಿ ರಾಜ್ಯಕ್ಕೆ ಅನುಕೂಲವಾಗಲು ಶಕ್ತಿ ಮೀರಿ ಕೆಲಸ ಮಾಡಿದ್ದಾರೆ ಎಂದರು.

ಶುಕ್ರವಾರ, ಶನಿವಾರ ರಜತ ಮಹೋತ್ಸವ ಅಂಗವಾಗಿ ಬೆಂಗಳೂರಿನ ಜೆಪಿ ಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಎಲ್ಲರೂ‌ ಆಗಮಿಸಬೇಕೆಂದು ಕೋರುತ್ತೇವೆ. ಗುರುವಾರ ಕಾರ್ಯಕಾರಿ ಮಂಡಳಿ ಸಭೆ ಹಮ್ಮಿಕೊಳ್ಳಲಾಗಿದೆ. ಪಕ್ಷ ಸಂಘಟನೆ ದೃಷ್ಟಿಯಿಂದ ಜನವರಿಯಲ್ಲಿ ಬೃಹತ್ ಸಮ್ಮೇಳನ ಮಾಡುತ್ತೇವೆ ಎಂದರು.

ಶಾಸಕ ಎಚ್.ಪಿ. ಸ್ವರೂಪ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಕೆ.ಎಸ್. ಮಂಜುನಾಥ್, ರಘು‌ ಹೊಂಗೆರೆ ಇತರರಿದ್ದರು.

error: Content is protected !!