10.8 C
Munich
Home News ಚನ್ನರಾಯಪಟ್ಟಣದಲ್ಲಿ ವ್ಯಾಪಕ ಮಳೆ – ರೈತರ ಮೊಗದಲ್ಲಿ ಮಂದಹಾಸ

ಚನ್ನರಾಯಪಟ್ಟಣದಲ್ಲಿ ವ್ಯಾಪಕ ಮಳೆ – ರೈತರ ಮೊಗದಲ್ಲಿ ಮಂದಹಾಸ

Extensive rain fell across the taluk on Tuesday night and Wednesday morning.

ಚನ್ನರಾಯಪಟ್ಟಣ ತಾಲ್ಲೂಕಿನಾದ್ಯಂತ ಭಾನುವಾರ ರಾತ್ರಿ ಹಾಗೂ ಸೋಮವಾರ ಬೆಳಗ್ಗೆ ವ್ಯಾಪಕ ಮಳೆ ಸುರಿಯಿತು.

ಮಿಂಚು, ಗುಡುಗು, ಸಿಡಿಲು ಅಥವಾ ಬಲವಾದ ಗಾಳಿಯ ಅಬ್ಬರವಿಲ್ಲದೆ ಸುರಿದ ಹದಮಳೆ ಕೃಷಿ ಪ್ರದೇಶಗಳಿಗೆ ಜೀವನಾಡಿಯಂತೆ ಕಾರ್ಯನಿರ್ವಹಿಸಿದೆ.

ತೆಂಗು ತೋಟಗಳು ಮತ್ತು ಕೃಷಿ ಜಮೀನುಗಳು ಜಲಾವೃತಗೊಂಡಿದ್ದು, ರೈತರ ಮುಖದಲ್ಲಿ ಸಂತಸ ಮೂಡಿದೆ. ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿದ್ದು, ಕೆರೆಕಟ್ಟೆಗಳಲ್ಲಿ ಶೇ.50  ರಿಂದ 60 ರಷ್ಟು ನೀರು ಸಂಗ್ರಹವಾಗಿದೆ.

ತಾಲೂಕಿನ ಹಲವೆಡೆಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನೀರಿನಮಟ್ಟ ಏರಿಕೆಯಾಗಿದ್ದು, ಹಿಂಗಾರು ಬೆಳೆಗಾರರು ಉತ್ತಮ ನಿರೀಕ್ಷೆ ಹೊಂದಿದ್ದಾರೆ.

ಚನ್ನರಾಯಪಟ್ಟಣದಲ್ಲಿ ಉತ್ತಮ ಮಳೆಯು ಕಳೆದ ಕೆಲವು ತಿಂಗಳ ಬರಗಾಲದ ಬಳಿಕ ನೆಮ್ಮದಿಯ ವಾತಾವರಣವನ್ನು ನಿರ್ಮಿಸಿದೆ.

error: Content is protected !!