11.1 C
Munich
Home News ಹಾಸನ: ಗಣೇಶೋತ್ಸವ ದುರಂತ ಪ್ರಕರಣ:ಗಾಯಾಳು ಆಕಾಶ್ ಮೈಸೂರಿಗೆ ಶಿಫ್ಟ್

ಹಾಸನ: ಗಣೇಶೋತ್ಸವ ದುರಂತ ಪ್ರಕರಣ:ಗಾಯಾಳು ಆಕಾಶ್ ಮೈಸೂರಿಗೆ ಶಿಫ್ಟ್

ಹಾಸನ : ತಾಲ್ಲೂಕಿನ ಮೊಸಳೆಹೊಸಳ್ಳಿಯಲ್ಲಿ ಟ್ರಕ್ ಹರಿದು ಹತ್ತು ಮಂದಿ ಮೃತಪಟ್ಟಿದ್ದ ದುರಂತದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿ ಆಕಾಶ್ (21) ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಶಿಫ್ಟ್ ಮಾಡಲಾಗಿದೆ.

ಆಕಾಶ್ ಹಾಸನದ ಹಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರ ಸಲಹೆಯಂತೆ ಅವರನ್ನು ಮೈಸೂರಿನ ಜೆ‌ಎಸ್‌ಎಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಮೃತ್ಯುಂಜಯನಹಳ್ಳಿ ಗ್ರಾಮದ ಮೂಲದ ನಿವಾಸಿಯಾಗಿರುವ ಆಕಾಶ್, ಮೊಸಳೆಹೊಸಳ್ಳಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೂರನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾರೆ.

error: Content is protected !!