19.5 C
Munich
Home News ಮಕ್ಕಳ ಭವಿಷ್ಯ ಕಾಪಾಡಲು ಡ್ರಗ್ಸ್ ವಿರುದ್ಧ ಆಂದೋಲನ ಅನಿವಾರ್ಯ- ಆ. 21ಕ್ಕೆ ಡ್ರಗ್ಸ್ ಮುಕ್ತ...

ಮಕ್ಕಳ ಭವಿಷ್ಯ ಕಾಪಾಡಲು ಡ್ರಗ್ಸ್ ವಿರುದ್ಧ ಆಂದೋಲನ ಅನಿವಾರ್ಯ- ಆ. 21ಕ್ಕೆ ಡ್ರಗ್ಸ್ ಮುಕ್ತ ಸಕಲೇಶಪುರ 2ನೇ ವಾರ್ಷಿಕ ಸಮಾವೇಶ: ಎಚ್.ಎಂ. ವಿಶ್ವನಾಥ್

ಸಕಲೇಶಪುರ: “ಡ್ರಗ್ಸ್ ಬಳಕೆಯನ್ನು ತಡೆಗಟ್ಟುವುದು ಪ್ರತಿಯೊಬ್ಬರ ಕರ್ತವ್ಯ. ನಮ್ಮ ಮಕ್ಕಳು, ವಿದ್ಯಾರ್ಥಿಗಳು ಮತ್ತು ಯುವಕರ ಭವಿಷ್ಯವನ್ನು ಉಳಿಸಬೇಕಾದರೆ ಎಲ್ಲರೂ ಕೈಜೋಡಿಸಬೇಕು ಎಂದು ಮಾಜಿ ಶಾಸಕ ಹಾಗೂ ಡ್ರಗ್ಸ್ ಮುಕ್ತ ಭಾರತ ಆಂದೋಲನದ ಪ್ರಮುಖರು ಹೆಚ್.ಎಂ. ವಿಶ್ವನಾಥ್ ಹೇಳಿದರು.

ಅವರು ಆಗಸ್ಟ್ ೨೧ರಂದು ಗುರುವಾರ ಬೆಳಿಗ್ಗೆ ೧೧ ಗಂಟೆಗೆ ಸಕಲೇಶಪುರದ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಲಿರುವ ಡ್ರಗ್ಸ್ ಮುಕ್ತ ಸಕಲೇಶಪುರ ಎರಡನೇ ವರ್ಷದ ಸಮಾವೇಶ ಕುರಿತು ಮಾಹಿತಿ ನೀಡಿದರು.

ಸಮಾಜದ ಜವಾಬ್ದಾರಿ – ಸುರಕ್ಷಿತ ಭವಿಷ್ಯ ಎಂಬ ಘೋಷವಾಕ್ಯದೊಂದಿಗೆ ನಡೆಯುವ ಈ ಸಮಾವೇಶದಲ್ಲಿ ಡ್ರಗ್ಸ್ ಬಳಕೆಯಿಂದ ಉಂಟಾಗುವ ದೈಹಿಕ–ಮಾನಸಿಕ ಹಾನಿ, ಕುಟುಂಬ–ಸಮಾಜದ ಮೇಲೆ ಬೀರುವ ದುಷ್ಪರಿಣಾಮಗಳ ಕುರಿತು ಚರ್ಚೆ ನಡೆಯಲಿದೆ.

ಕಾರ್ಯಕ್ರಮಕ್ಕೆ ಪ್ರಮುಖ ಅತಿಥಿಗಳಾಗಿ ರಾಜ್ಯ ನೀತಿ ಮತ್ತು ಯೋಜನಾ ಆಯೋಗ,ಉಪಾಧ್ಯಕ್ಷ ಬಿ.ಆರ್. ಪಾಟೀಲ್, ಪಂಜಾಬ್ ರಾಜ್ಯದ ಡ್ರಗ್ಸ್ ಮುಕ್ತ ಭಾರತ ಆಂದೋಲನದ ಪ್ರಮುಖ ಡಾ. ಸುಖ್ಜೋತ್ ಸಿಂಗ್, ಮಹಾರಾಷ್ಟ್ರದ ಭಾರತ ಡ್ರಗ್ಸ್ ಮುಕ್ತ ಆಂದೋಲನದ ಪ್ರಮುಖ, ಅವಿನಾಶ್ ಕಾಕಡೆ, ನಾಟಕ ನಿರ್ದೇಶಕರಾದ ಪ್ರಸನ್ನ ಗಾಂಧಿವಾದಿ ಸೇರಿದಂತೆ ಅನೇಕ ಅಧಿಕಾರಿಗಳು ಗಣ್ಯರು ಭಾಗವಹಿಸಲಿದ್ದಾರೆ ಎಂದರು.

“ಡ್ರಗ್ಸ್ ವಿರುದ್ಧ ಹೋರಾಡಲು ಸಮಾಜದ ಪ್ರತಿಯೊಬ್ಬರೂ ಹೊಣೆಗಾರಿಕೆಯಿಂದ ವರ್ತಿಸಿದರೆ, ಸಕಲೇಶಪುರವನ್ನು ಡ್ರಗ್ಸ್ ಮುಕ್ತಗೊಳಿಸುವುದು ಖಚಿತ” ಎಂದು ವಿಶ್ವನಾಥ್ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಡ್ರಗ್ಸ್ ಮುಕ್ತ ಸಕಲೇಶಪುರ ಆಂದೋಲನದ ಸಂಚಾಲಕ. ಮಲ್ನಾಡ್ ಮೆಹಬೂಬ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜೈಭೀಮ್ ಮಂಜು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಶಾರದಾ ಗುರುಮೂರ್ತಿ, ಅರ್ಚನ ಜಯಂತ್, ಜಾಮಿಯಾ ಮಸೀದಿ ಅಧ್ಯಕ್ಷ ಅಮ್ಜದ್ ಸಾಬ್, ಉಪಾಧ್ಯಕ್ಷ ಎಸ್ ಎಸ್ ಅಸ್ಲಂ, ಮಲ್ನಾಡ್ ಜಾಕೀರ್, ಜನಪರ ಹೋರಾಟ ಸಂಘಟನೆಯ ರವಿಕುಮಾರ್, ಗಣಪತಿ ಸೇವಾ ಸಮಿತಿಯ ನಂದಿ ಕೃಪರಾಜು, ಸನಾತನ ಟ್ರಸ್ಟ್ ಲೋಹಿತ್, ಮಲೆನಾಡು ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಸಾಗರ್ ಜಾನೆಕೆರೆ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ರಮೇಶ್ ಪೂಜಾರಿ, ಗ್ರಾ ಪಂ ಸದಸ್ಯ ತಿಮ್ಮಯ್ಯ ಹರೀಶ್, ಸೇರಿದಂತೆ ಮೂಲ ನಿವಾಸಿ ಹೋರಾಟ ಸಂಘಟನೆಯ ಕಾರ್ಯದರ್ಶಿ ಮಾಸವಳ್ಳಿ ಚಂದ್ರು, ವೀರ ಶೈವ ಸಮಾಜದ ಶ್ವೇತ ರವಿಕುಮಾರ್, ಸಾಯಿರಾ ಭಾನು ಸೇರಿದಂತೆ ಆನೇಕರು ಇದ್ದರು.

error: Content is protected !!