10.4 C
Munich
Home News ಹಾಸನ: ಛಲವಾದಿ ಭವನಕ್ಕೆ ಸರ್ಕಾರ ೨೨.೩೩ ಕೋಟಿ ಅನುದಾನ ನೀಡಲು ಸರ್ಕಾರ ಒಪ್ಪಿಗೆ: ಜಿಲ್ಲಾ ಸಂಘದಿಂದ...

ಹಾಸನ: ಛಲವಾದಿ ಭವನಕ್ಕೆ ಸರ್ಕಾರ ೨೨.೩೩ ಕೋಟಿ ಅನುದಾನ ನೀಡಲು ಸರ್ಕಾರ ಒಪ್ಪಿಗೆ: ಜಿಲ್ಲಾ ಸಂಘದಿಂದ ಅಭಿನಂದನೆ

ಹಾಸನ: ಬೆಂಗಳೂರಿನ ಹೃದಯ ಭಾಗದಲ್ಲಿರುವ ಸರ್.ಎಂ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ನಿರ್ಮಾಣ ಹಂತದಲ್ಲಿರುವ ಛಲವಾದಿ ಭವನಕ್ಕೆ ಸರ್ಕಾರ ೨೨.೩೩ ಕೋಟಿ ಅನುದಾನ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದ್ದು ಸರ್ಕಾರದ ಈ ಕಾರ್ಯಕ್ಕೆ ಹಾಸನ ಜಿಲ್ಲಾ ಛಲವಾದಿ ಮಹಾಸಭಾ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದೆ.

ಈ ಹಿಂದೆ ಛಲವಾದಿ ಮಹಾಸಭಾ ಭವನ ನಿರ್ಮಾಣ ಕಾಮಗಾರಿ ಆರಂಭವಾಗಿ ಅನುದಾನದ ಕೊರತೆಯಿಂದ ಅರ್ಧಕ್ಕೆ ನಿಂತಿದ್ದ ಹಿನ್ನೆಲೆಯಲ್ಲಿ ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷರಾದ  ಶಿವರಾಮ್ ಅವರ ಅವಿರತ ಶ್ರಮದಿಂದ ಸರ್ಕಾರಕ್ಕೆ ಮನವರಿಕೆ ಮಾಡಿ ಕೊಟ್ಟು ಸೆ. 18ರಂದು ಅನುದಾನ ನೀಡಲು ಕ್ಯಾಬಿನೆಟ್ ನಲ್ಲಿ ಒಪ್ಪಿಗೆ ದೊರೆತಿದೆ.

ಕಾಮಗಾರಿಗೆ 22 ಕೋಟಿ 33 ಲಕ್ಷ ರೂಗಳನ್ನು ಬಿಡುಗಡೆಗೊಳಿಸಲು ಒಪ್ಪಿಗೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಹೆಚ್ .ಸಿ ಮಹದೇವಪ್ಪ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಸಚಿವ ಸಂಪುಟದ ಎಲ್ಲಾ ಸಚಿವರಿಗೂ ಹಾಸನ ಜಿಲ್ಲಾ ಚಲವಾದಿ ಮಹಾಸಭಾ (ರಿ) ಹಾಸನ ಜಿಲ್ಲಾ ಛಲವಾದಿ ಸಮುದಾಯದ ಧನ್ಯವಾದ ತಿಳಿಸಿದೆ..

error: Content is protected !!