ಅರಸೀಕೆರೆ: ಜ.10ರಂದು ನಿರಂಜನ ಪೀಠದಲ್ಲಿ ಲಿಂಗೈತ್ಯ ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಪುಣ್ಯ ಸಂಸ್ಮರಣೋತ್ಸವ

The 19th year commemoration of the senior guru of the Peetha, Lingayatya Sri Chandrashekhar Swamiji, and the 26th awareness program will be held on January 10th in the presence of Sanehalli Sri Panditaradhya Panditaradhya Shivacharya Swamiji.

ಅರಸೀಕೆರೆ: ಮಾಡಾಳು ಗ್ರಾಮದ ನಿರಂಜನ ಪೀಠದ ಹಿರಿಯ ಗುರುಗಳಾದ ಲಿಂಗೈತ್ಯ ಶ್ರೀ ಚಂದ್ರಶೇಖರ ಸ್ವಾಮೀಜಿಯವರ 19ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ ಹಾಗೂ 26ನೇ ಅರಿವಿನ ಜಾಗೃತಿ ಕಾರ್ಯಕ್ರಮ ಜ 10 ರಂದು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಸಾನಿಧ್ಯದಲ್ಲಿ ಜರುಗಲಿದೆ ಎಂದು ಶ್ರೀ ರುದ್ರಮುನಿ ಸ್ವಾಮೀಜಿ ಮಂಗಳವಾರ ತಿಳಿಸಿದರು.

ಗ್ರಾಮದ ನಿರಂಜನ ಪೀಠದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ ಪ್ರತಿವರ್ಷದ ಸಂಪ್ರ ದಾಯಿದಂತೆ ಹಾಗೂ ಭಕ್ತರ ಆಶಯದಂತೆ ನಡೆಯಲಿದೆ ಎಂದರು.

ಅಂದು ಬೆಳಿಗ್ಗೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ನಡೆಯಲಿದ್ದು 9:30 ಕ್ಕೆ ಟ್ರ್ಯಾಕ್ಟರ್ ನಲ್ಲಿ ಪುಷ್ಪ ಅಲಂಕೃತ ಪಲ್ಲಕ್ಕಿಯಲ್ಲಿ ಹಿರಿಯ ಗುರುಗಳ ಮತ್ತು ಜಗಜ್ಯೋತಿ ಬಸವೇಶ್ವರರ ಭಾವಚಿತ್ರ ಮೆರವಣಿಗೆ ಗ್ರಾಮದ ಬೀದಿಗಳಲ್ಲಿ ಕರಡೇವು ವಾದ್ಯದೊಂದಿಗೆ ನಡೆಯಲಿದೆ ಎಂದರು.

ಬೆಳಿಗ್ಗೆ 11 ಗಂಟೆಗೆ ಸಾಣೇಹಳ್ಳಿ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಧಾರ್ಮಿಕ ಸಮಾರಂಭ ಆಯೋಜನೆಗೊಂಡಿದ್ದು ನೂತನ ವಿದ್ಯಾರ್ಥಿ ನಿಲಯ ಕಟ್ಟಡ ಉದ್ಘಾಟನೆ ಯನ್ನು ಕೆರಗೋಡಿ ರಂಗಾಪುರ ಕ್ಷೇತ್ರದ ಶ್ರೀ ಗುರುಪರ ದೇಶಿಕೇಂದ್ರ ಸ್ವಾಮೀಜಿ ನೆರವೇರಿಸಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ ವಹಿಸುವರು ಎಂದರು.

ಸಭಾ ಕಾರ್ಯಕ್ರಮದ ಉದ್ಘಾಟನೆ ಪಾಂಡುಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಸ್ವಾಮೀಜಿ ನೆರವೇರಿಸುವರು ಅನೇಕ ಮಠಾಧೀಶರು ಸೇರಿದಂತೆ ಸಂಸದ ಎಂ ಶ್ರೇಯಸ್ ಪಟೇಲ್, ಶಾಸಕರಾದ ಕೆಎಂ ಶಿವಂಗೇಗೌಡ, ಎಚ್ ಡಿ ರೇವಣ್ಣ, ಎಚ್ ಡಿ ತಮ್ಮಯ್ಯ ,ಪಾಲ್ಗೊಳ್ಳಲಿದ್ದಾರೆ ಮಾಜಿ ಶಾಸಕರು ಜನಪ್ರತಿನಿಧಿಗಳು ಸಾಹಿತಿ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಸ್ವಾಮೀಜಿ ಹೇಳಿದರು.

The 19th year commemoration of the senior guru of the Peetha, Lingayatya Sri Chandrashekhar Swamiji, and the 26th awareness program will be held on January 10th in the presence of Sanehalli Sri Panditaradhya Panditaradhya Shivacharya Swamiji.