ಅರಸೀಕೆರೆ: ಮಾಡಾಳು ಗ್ರಾಮದ ಇತಿಹಾಸ ಪ್ರಸಿದ್ಧ ಪುಣ್ಯ ಕ್ಷೇತ್ರ ಮೂಲಸ್ಥಾನ ಶ್ರೀ ಗೌರಮ್ಮದೇವಿ ದೇವಾಲಯದಲ್ಲಿ ಜ. 19ರಂದು ಹಾರನಹಳ್ಳಿ ಕೋಡಿಮಠದ ಲಿಂಗೈಕ್ಯ ಶ್ರೀ ನೀಲಲೋಚನ ಸ್ವಾಮೀಜಿಯವರ ಪುಣ್ಯಸ್ಮರಣೋತ್ಸವ ಕಾರ್ಯ ಕ್ರಮವು ಜಗದ್ಗುರು ಡಾ. ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ಸಾನಿಧ್ಯದಲ್ಲಿ ಜರುಗಲಿದೆ ಎಂದು ಗೌರಮ್ಮದೇವಿ ಸೇವಾ ಸಮಿತಿ ಅಧ್ಯಕ್ಷ ಎಂಎಸ್ ನಟ ರಾಜ್ ಸೋಮವಾರ ತಿಳಿಸಿದರು.
ತಾಲೂಕಿನ ಕಣಕಟ್ಟೆ ಹೋಬಳಿ ಮಾಡಾಳು ಗ್ರಾಮದ ಶ್ರೀ ಅಮ್ಮನವರ ದೇವಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದ್ಗುರುಗಳ ಸತ್ ಸಂಕಲ್ಪದಂತೆ ಹಾಗೂ ಅವರ ಅಪ್ಪಣೆ ಮೇರೆಗೆ ಈ ಪುಣ್ಯ ಸಂಸ್ಕರಣೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಅಂದು ಬೆಳಿಗ್ಗೆ ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀಗಳವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಪಂಚಾಭಿಷೇಕ ಸಹಸ್ರ ಬಿಲ್ವಾರ್ಚನೆಯನ್ನು ಪುರೋಹಿತರು ನೂರಾರು ಭಕ್ತರ ಸಮ್ಮುಖದಲ್ಲಿ ಧಾರ್ಮಿಕ ವಿಧಿ ವಿಧಾನಗಳಿಂದ ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಗುವುದು ಎಂದರು.
ಸಂಜೆ 4:30 ಗಂಟೆಗೆ ಗ್ರಾಮದ ಅಮ್ಮನವರ ಮೂಲ ಸನ್ನಿಧಿಯಿಂದ ಶ್ರೀ ನೀಲಲೋಚನ ಸ್ವಾಮೀಜಿಯವರ ಭಾವ ಚಿತ್ರವನ್ನು ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಮಂಗಲ ಕರಡೇವು ವಾದ್ಯದೊಂದಿಗೆ ಮೂಲಸ್ಥಾನ ಗೌರಮ್ಮದೇವಿ ದೇವಾಲಯಕ್ಕೆ ಭಕ್ತರೊ ಡಗೂಡಿ ಕರೆ ತರಲಾಗು ವುದು ಎಂದರು.
ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮವು ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಯವರ ಸಾನಿಧ್ಯದಲ್ಲಿ ನಡೆಯಲಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಕರ್ನಾಟಕ ರಾಜ್ಯಗೃಹ ಮಂಡಳಿ ಅಧ್ಯಕ್ಷ ಕೆಎಂ ಶಿವಲಿಂಗೇಗೌಡ ನೆರವೇರಿಸುವರು ಎಂದರು.
ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಬೆಕ್ಕಿನ ಕಲ್ಮಠ ಅನಂತಪುರಂ ಶ್ರೀಗಳ ಸಮ್ಮುಖದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಶ್ರೀ ಶಿವಯೋಗೀಶ್ವರ ಸ್ವಾಮೀಜಿ ವಿರಕ್ತಮಠ ಬೊಮ್ಮನಹಳ್ಳಿ ಮೃತ್ಯುಂಜಯ ಸ್ವಾಮೀಜಿ ಹಿರೇಮಠ ಬೆಳಗಾವಿ ಶ್ರೀ ರುದ್ರಮುನಿ ಸ್ವಾಮೀಜಿ ನಿರಂಜನ ಪೀಠ ಮಾಡಾಳು ಶ್ರೀ ಜ್ಞಾನ ಪ್ರಭು ಸಿದ್ಧರಾಮ ದೇಶಿ ಕೇಂದ್ರಸ್ವಾಮೀಜಿ ಮೂರು ಕಳಸ ಮಠ ಶ್ರೀ ಜಯಚಂದ್ರಶೇಖರ ಸ್ವಾಮೀಜಿ ಕೇದಿಗೆ ಮಠಕೋಳಗುಂದ ಇವರು ಪಾಲ್ಗೊಳ್ಳುವರು ಪ್ರಾಸ್ತಾವಿಕ ನುಡಿ ಶ್ರೀ ಚೇತನ್ ಮರಿದೇವರು ಉತ್ತರಾಧಿಕಾರಿ ಕೋಡಿಮಠ ನುಡಿಯಲ್ಲಿದ್ದಾರೆ.
ಅತಿಥಿಗಳಾಗಿ ಸಂಸದ ಎಂ ಶ್ರೇಯಸ್ ಪಟೇಲ್ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾಜಿ ಶಾಸಕರಾದ ಕೆಪಿ ಪ್ರಭುಕುಮಾರ್ ಜಿಎಸ್ ಪರಮೇಶ್ವರಪ್ಪ ಜೇನುಕಲ್ ಸಿದ್ದೇಶ್ವರ ಟ್ರಸ್ಟ ಅಧ್ಯಕ್ಷ ಜಿಬಿ ಬಸವರಾಜ್ ಕಾಂಗ್ರೆಸ್ ಮುಖಂಡ ಜಿಬಿ ಶಶಿಧರ್ ಹಾಗೂ ಜನಪ್ರತಿನಿಧಿಗಳು ಸಾಹಿತಿಗಳು ಕಲಾವಿದರು ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕೋಡಿಮಠ ಮಹಾ ಸಂಸ್ಥಾನದ ವ್ಯವಸ್ಥಾಪಕ ಜಿ ಎಸ್ ದಕ್ಷಿಣ ಮೂರ್ತಿಉಪಸ್ಥಿತರಿದ್ದರು.
Speaking to reporters at the Sri Amman Temple in Madalu village, Kanakatte Hobli, he informed that this holy burial ceremony program will be held as per the wishes and orders of the Jagadgurus.










