10.3 C
Munich
Home News Politics ಸಿದ್ದೇಶ್ ನಾಗೇಂದ್ರ ಹಾಸನ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷ; ವೀರಶೈವ ಸಮುದಾಯದ ಮುಖಂಡನಿಗೆ ಮಣೆ

ಸಿದ್ದೇಶ್ ನಾಗೇಂದ್ರ ಹಾಸನ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷ; ವೀರಶೈವ ಸಮುದಾಯದ ಮುಖಂಡನಿಗೆ ಮಣೆ

ವೀರಶೈವ ಮುಖಂಡ ಎಂ.ಎಸ್.ನಾಗೇಂದ್ರ ಅವರ ಪುತ್ರ ಸಿದ್ದೇಶ್

ಹಾಸನ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಟೀಂ ಅಂತಿಮಗೊಂಡಿದ್ದು, ಅದರಂತೆ ಜಿಲ್ಲಾ ಘಟಕಗಳ ಅಧ್ಯಕ್ಷರ ಪಟ್ಟಿ ಪ್ರಕಟವಾಗಿದೆ.

ಹಾಸನ ಜಿಲ್ಲಾಧ್ಯಕ್ಷರಾಗಿ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಸಕ್ರಿಯರಾಗಿರುವ, ಕಳೆದ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ವಂಚಿತರಾಗಿದ್ದ ಸಿದ್ದೇಶ್ ನಾಗೇಂದ್ರ ಅವರನ್ನು ನೇಮಕ ಮಾಡಲಾಗಿದೆ.

ಇಲ್ಲಿದೆ ಬಿಜೆಪಿ ನೂತನ ಜಿಲ್ಲಾಧ್ಯಕ್ಷರ ಪಟ್ಟಿ

ಮಾಜಿ ಶಾಸಕ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ. ಗೌಡ ಅವರ ಆಪ್ತ ವಲಯಗಳಲ್ಲಿದ್ದ ಸಿದ್ದೇಶ್ ಅವರಿಗೆ ಅವರ ಸ್ನೇಹ, ವಿಶ್ವಾಸಗಳೇ ವರವಾಗಿವೆ.

error: Content is protected !!