ಹಾಸನ: ಜಿಲ್ಲಾಡಳಿತದ ವಿರುದ್ಧ ಜೆಡಿಎಸ್ ಪ್ರತಿಭಟನೆ ತೀವ್ರ

The protest led by JDS MLAs A. Manju and H. P. Swarup has taken a serious turn, alleging that the district administration showed disrespect when Union Minister H. D. Kumaraswamy came to visit Hassanambe.

ಹಾಸನ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಹಾಸನಾಂಬೆ ದರ್ಶನಕ್ಕೆ ಬಂದಾಗ ಜಿಲ್ಲಾಡಳಿತ ಅಗೌರವ ತೊರಿದೆ ಎಂದು ಆರೋಪಿಸಿ ಜೆಡಿಎಸ್ ಶಾಸಕರಾದ ಎ.ಮಂಜು, ಹೆಚ್.ಪಿ.‌ಸ್ವರೂಪ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ.
ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಸ್ಥಳಕ್ಕೆ ಬರಲೆಬೇಕೆಂದು ಪಟ್ಟು ಹಿಡಿದು ಬ್ಯಾರಿಕೇಡ್ ತಳ್ಳಾಡಿದರು.

ಪರಿಸ್ಥಿತಿ ನಿಯಂತ್ರಿಸಲು ಎಸ್ಪಿ, ಎಸಿ ಸಾಕಷ್ಟು ಪ್ರಯೋಜನವಾಗಲಿಲ್ಲ. ಜಿಲ್ಲಾಧಿಕಾರಿ ಇಲ್ಲಿಗೆ ಬರಲೇಬೇಕೆಂಬ ಪಟ್ಟು ಸಡಿಲಿಸಲಿಲ್ಲ. ಈ ವಿಷಯ ತಿಳಿದ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಎಕ್ಸಿಟ್ ಗೆಟ್ ನಿಂದ ಕಾರು ಹತ್ತಿ ತೆರಳಿದರು.

ಜಿಲ್ಲಾಧಿಕಾರಿ ಬರುವುದು ಎರಡು ದಿನವಾದರೂ ಸ್ಥಳದಿಂದ ಕದಲುವುದಿಲ್ಲವೆಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.