9.1 C
Munich
Home News ಹೊಸೂರು ಗ್ರಾಮದಲ್ಲಿ ದುರ್ಘಟನೆ: ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಪುಟ್ಟ ಬಾಲಕರ ಸಾವು

ಹೊಸೂರು ಗ್ರಾಮದಲ್ಲಿ ದುರ್ಘಟನೆ: ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಪುಟ್ಟ ಬಾಲಕರ ಸಾವು

sad incident that took place in Hosur village of Sakleshpur taluk has shocked everyone. Two small boys who were playing in an agricultural pond drowned and died.

ಹಾಸನ: ಸಕಲೇಶಪುರ ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ನಡೆದ ದುಃಖದ ಘಟನೆ ಎಲ್ಲೆಡೆ ದಿಗ್ಭ್ರಮೆ ಮೂಡಿಸಿದೆ. ಕೃಷಿ ಹೊಂಡದಲ್ಲಿ ಆಟವಾಡುತ್ತಿದ್ದ ಇಬ್ಬರು ಪುಟ್ಟ ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಮೃತರನ್ನು ಪ್ರಣಯ್ (7) ಮತ್ತು ನಿಶಾಂತ್ (5) ಎಂದು ಗುರುತಿಸಲಾಗಿದೆ. ಇವರ ಪೋಷಕರು ಸಕಲೇಶಪುರದ ಐಬಿಸಿ ಕಾಫಿ ಎಸ್ಟೇಟ್‌ನಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.

ಇಂದು ಬೆಳಿಗ್ಗೆ ಪೋಷಕರು ತೋಟದ ಕೆಲಸಕ್ಕೆ ತೆರಳಿದ್ದ ವೇಳೆ ಮಕ್ಕಳು ಮನೆಯ ಬಳಿ ಆಟವಾಡುತ್ತಿದ್ದರು.
ಆಟವಾಡುತ್ತಲೇ ಕಾಫಿ ತೋಟದಲ್ಲಿದ್ದ ಕೃಷಿ ಹೊಂಡದ ಬಳಿ ಪ್ಲಾಸ್ಟಿಕ್ ಆಟಿಕೆ ಹಿಡಿದು ತೆರಳಿದ ಇಬ್ಬರೂ, ಆಟಿಕೆ ನೀರಿಗೆ ಬಿದ್ದ ಹಿನ್ನೆಲೆಯಲ್ಲಿ ತರಲು ಹೊಂಡಕ್ಕೆ ಇಳಿದಿದ್ದಾರೆ.
ಈ ವೇಳೆ ನೀರಿನ ಆಳ ಹೆಚ್ಚಿದ್ದರಿಂದ ಇಬ್ಬರೂ ಮೇಲಕ್ಕೆ ಬರಲಾಗದೆ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ.

ನಂತರ ಮಕ್ಕಳು ಕಾಣದೆ ಇದ್ದರಿಂದ ಪೋಷಕರು ಎಲ್ಲೆಡೆ ಹುಡುಕಾಟ ನಡೆಸಿದಾಗ ಹೊಂಡದ ದಡದಲ್ಲಿ ಮಕ್ಕಳ ಚಪ್ಪಲಿಗಳು ಕಂಡುಬಂದಿವೆ. ಹೊಂಡಕ್ಕೆ ಇಳಿದು ಹುಡುಕಾಟ ನಡೆಸಿದಾಗ ಇಬ್ಬರು ಮಕ್ಕಳ ಶವಗಳು ಪತ್ತೆಯಾಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಶವಗಳನ್ನು ಹೊರತೆಗೆದಿದ್ದು, ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಗೆ ರವಾನಿಸಲಾಗಿದೆ.

ಆಸ್ಪತ್ರೆ ಬಳಿ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದ್ದು, ನೆರೆದಿದ್ದವರ ಕಣ್ಣಲ್ಲಿ ಕಣ್ಣೀರು ತರಿಸಿದೆ.

ಸ್ಥಳೀಯರು ಘಟನೆಯನ್ನು ಕಂಡು ದುಃಖ ವ್ಯಕ್ತಪಡಿಸಿದ್ದು, ಮಕ್ಕಳು ಪೋಷಕರ ಕಣ್ಣೆದುರಿನ ಚಿಕ್ಕ ಕ್ಷಣದಲ್ಲೇ ಕಣ್ಮರೆಯಾಗಿದ್ದಾರೆಂಬ ನೋವು ಎಲ್ಲರ ಹೃದಯ ಮುಟ್ಟಿದೆ.
ಈ ಸಂಬಂಧ ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!