12.7 C
Munich
Home News ಸಕಲೇಶಪುರ: ಮಳೆ-ಗಾಳಿ ಅಬ್ಬರ: ಹೆತ್ತೂರಿನಲ್ಲಿ ವಿದ್ಯುತ್ ಕಂಬ, ಮರ ಉರುಳಿ ಸಂಚಾರ ಸ್ಥಗಿತ

ಸಕಲೇಶಪುರ: ಮಳೆ-ಗಾಳಿ ಅಬ್ಬರ: ಹೆತ್ತೂರಿನಲ್ಲಿ ವಿದ್ಯುತ್ ಕಂಬ, ಮರ ಉರುಳಿ ಸಂಚಾರ ಸ್ಥಗಿತ

Heavy rain and strong winds lashed various parts of the district on Thursday night. As a result of the wind blowing down electric poles and trees near Hettur village in Sakleshpur taluk, vehicular traffic was stopped for some time on the Hadlahalli-Hettur main road.

ಹಾಸನ : ಜಿಲ್ಲೆಯ ವಿವಿಧೆಡೆ ಗುರುವಾರ ರಾತ್ರಿ ಭಾರೀ ಮಳೆ ಹಾಗೂ ಗಾಳಿ ಅಬ್ಬರಿಸಿದೆ. ಸಕಲೇಶಪುರ ತಾಲ್ಲೂಕಿನ ಹೆತ್ತೂರು ಗ್ರಾಮದ ಬಳಿ ಗಾಳಿಗೆ ವಿದ್ಯುತ್ ಕಂಬಗಳು ಹಾಗೂ ಮರಗಳು ಉರುಳಿ ಬಿದ್ದ ಪರಿಣಾಮ ಹಾಡ್ಲಹಳ್ಳಿ–ಹೆತ್ತೂರು ಮುಖ್ಯ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತು.

ವಿದ್ಯುತ್ ಕಂಬಗಳ ಜೊತೆಗೆ ಹಲವು ಮರಗಳು ನೆಲಕ್ಕುರುಳಿದ ಕಾರಣ ಹೆತ್ತೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ರಾತ್ರಿಯಿಡೀ ರಕ್ಷಣಾ ಸಿಬ್ಬಂದಿ ಮರ ತೆರವು ಕಾರ್ಯಾಚರಣೆ ನಡೆಸಿ ರಸ್ತೆ ಸಂಚಾರವನ್ನು ಮರುಸ್ಥಾಪಿಸಿದರು.

ಮಲೆನಾಡು ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ

error: Content is protected !!